Tuesday, 8 December 2015

KAS Mains Books

ಪತ್ರಿಕೆ-2 : ಸಾಮಾನ್ಯ ಅಧ್ಯಯನ-1

ಭಾಗ 3:ಭಾರತದ ಆರ್ಥಿಕ ವ್ಯವಸ್ಥೆ - ಯೋಜನೆ - ಗ್ರಾಮೀಣಾಭಿವೃದ್ಧಿ

1.ಭಾರತದ ಆರ್ಥಿಕ ವ್ಯವಸ್ಥೆ - ಹೆಚ್.ಆರ್.ಕೆ

2.ಭಾರತದ ಆರ್ಥಿಕ ವ್ಯವಸ್ಥೆ - ಸ್ಪರ್ಧಾಚೈತ್ರ ಪ್ರಕಾಶನದ ಪುಸ್ತಕಗಳು

3.ಕರ್ನಾಟಕದ ಆರ್ಥಿಕ ವ್ಯವಸ್ಥೆ -ನೇ.ತಿ.ಸೋಮಶೇಖರ

4.ಗ್ರಾಮೀಣಾಭಿವೃದ್ಧಿ- ಹೆಚ್.ಆರ್.ಕೃಷ್ಣಯ್ಯಗೌಡ

5.ಗ್ರಾಮೀಣಾಭಿವೃದ್ಧಿ - ಕೆ.ಭೈರಪ್ಪ

6.ಕರ್ನಾಟಕದ ಆರ್ಥಿಕ ಸಮೀಕ್ಷೆ

7.ಅಂತರರಾಷ್ಟ್ರೀಯ ಅರ್ಥಶಾಸ್ತ್ರ - ಹೆಚ್.ಆರ್.ಕೃಷ್ಣಯ್ಯಗೌಡ

8.ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ - ರಂಗನಾಥ್

9.ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ಅರ್ಥಶಾಸ್ತ್ರ ಪುಸ್ತಕಗಳು

Saturday, 28 November 2015

KAS Mains Books

ಪತ್ರಿಕೆ-2 : ಸಾಮಾನ್ಯ ಅಧ್ಯಯನ-1

ಭಾಗ 2: ಸಾಮಾಜಿಕ ಹಾಗೂ ರಾಜಕೀಯ ಚಿತ್ರಣ

ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಪುಸ್ತಕಗಳು

ಕನ್ನಡ ಕನ್ನಡಿಗ ಕರ್ನಾಟಕ -  ಚಿದಾನಂದಮೂರ್ತಿ ,ಇತರರು

ಭಾರತೀಯ ಸಮಾಜ- ಶಂಕರರಾವ್

ಕರ್ನಾಟಕದ ಇತಿಹಾಸ  - ಫಾಲಾಕ್ಷ.

ಸಮಾಜಶಾಸ್ತ್ರ ಸಂಪುಟ 1 - ಶಂಕರರಾವ್

ಭಾರತದ ಸಂವಿಧಾನ - ಪಿ.ಎಸ್.ಗಂಗಾಧರ

ಗ್ರಾಮೀಣಾಭಿವೃದ್ಧಿ- ಹೆಚ್.ಆರ್.ಕೃಷ್ಣಯ್ಯಗೌಡ

ಗ್ರಾಮೀಣಾಭಿವೃದ್ಧಿ - ಕೆ.ಭೈರಪ್ಪ

ಭಾರತದ ಸಂವಿಧಾನ - ಮೇರುನಂದನ್

KAS Mains Books

ಪತ್ರಿಕೆ-2 : ಸಾಮಾನ್ಯ ಅಧ್ಯಯನ-1

ಭಾಗ 1:ಭಾರತ ಮತ್ತು ಕರ್ನಾಟಕದ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ

ಭಾರತದ ಇತಿಹಾಸ-  ಸದಾಶಿವ

ಭಾರತದ ಇತಿಹಾಸ-  ಟಿ.ಜಿ.ಚಂದ್ರಶೇಖರಪ್ಪ

ಭಾರತೀಯ ಸಮಾಜ-  ಶಂಕರರಾವ್

ಪ್ರಾಚೀನ ಭಾರತ-  ಆರ್.ಎಸ್.ಶರ್ಮ

ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ-  ತಿಪ್ಪೇರುದ್ರಸ್ವಾಮಿ

ಕರ್ನಾಟಕ ಸಂಸ್ಕೃತಿ-  ಚಿದಾನಂದಮೂರ್ತಿ

ಕರ್ನಾಟಕದ ಇತಿಹಾಸ-  ಕಾಮತ್
                               ಮತ್ತು ಫಾಲಾಕ್ಷ

ಕರ್ನಾಟಕ ಕೈಪಿಡಿ-  ಗೆಜೆಟಿಯರ್ ಇಲಾಖೆ

ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ಇತಿಹಾಸ  ಪುಸ್ತಕಗಳು

Thursday, 19 November 2015

"ವಿಜಯವಾಣಿ" ಲೇಖನ:

ಬಾಂಗ್ಲಾ-ಭಾರತ  ಗಡಿ ಒಪ್ಪಂದ: ಸಂವಿಧಾನಕ್ಕೆ 100ನೇ ತಿದ್ದುಪಡಿ


ದಶಕಗಳಿಂದ ಕಗ್ಗಂಟಾಗಿದ್ದ ಭಾರತ-ಬಾಂಗ್ಲಾ ಗಡಿ ಬಿಕ್ಕಟ್ಟು ಈಗ ಇತಿಹಾಸ. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಜತೆಯಲ್ಲೇ ಸ್ನೇಹವನ್ನೂ ಬೆಸೆದಿದ್ದು ಈ ಒಪ್ಪಂದದ ವಿಶೇಷ. ಹುಟ್ಟಿ, ಬೆಳೆದ ಭೂಮಿ, ಅನ್ನ, ನೀರು ಕೊಟ್ಟ ಹೊಲಗದ್ದೆ, ಕೆರೆ, ಝರಿ ಎಲ್ಲವೂ ರಾತ್ರೋ ರಾತ್ರಿ ಅದಲು ಬದಲು. ದಿನದ ಹಿಂದೆ ಭಾರತದಲ್ಲಿದ್ದವರು ಕೆಲವೇ ಗಂಟೆಗಳಲ್ಲಿ ಬಾಂಗ್ಲಾ ನಾಗರಿಕರಾದರೆ, ಬಾಂಗ್ಲಾದಲ್ಲಿ ಹುಟ್ಟಿಬೆಳೆದವರು ಈಗ ಭಾರತದ ಪೌರರು. ಈ ಐತಿಹಾಸಿಕ ಭೂ ಪ್ರದೇಶ ಹಸ್ತಾಂತರ ಪ್ರಕ್ರಿಯೆ ಗಡಿ ಕದನ ನಡೆಸುತ್ತಿರುವ ವಿಶ್ವದ ಇತರೆ ರಾಷ್ಟ್ರಗಳಿಗೂ ಮಾದರಿಯಾಯಿತು.

 ವಿಶ್ವದ ಅತ್ಯಂತ ಕಗ್ಗಂಟಿನ ಸಮಸ್ಯೆ ಎಂದೇ ಪರಿಗಣಿಸಲ್ಪಟ್ಟಿದ್ದ ಭಾರತ- ಬಾಂಗ್ಲಾ ಗಡಿ ಸಮಸ್ಯೆಗೆ ಅಧಿಕೃತ ಪರಿಹಾರ ದೊರಕಿದೆ. ಶನಿವಾರ ಮಧ್ಯರಾತ್ರಿ ಐತಿಹಾಸಿಕ ಭೂಪ್ರದೇಶ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಈ ಸಂದರ್ಭ ಉಭಯ ದೇಶಗಳ ಜನರು ಸಂಭ್ರಮಾಚರಣೆ ನಡೆಸಿದರು. ಒಪ್ಪಂದದ ಪ್ರಕಾರ ಬಾಂಗ್ಲಾದೇಶದ 51 ಪರಾವೃತ ಹಳ್ಳಿಗಳು (ಎನ್‌ಕ್ಲೇವ್ಸ್) ಭಾರತದ ವ್ಯಾಪ್ತಿಗೆ ಬಂದಿದ್ದು 14000 ಜನರಿಗೆ ಭಾರತೀಯ ಪೌರತ್ವ ದೊರಕಿದೆ.

ಹಸ್ತಾಂತರ ಪ್ರಕ್ರಿಯೆ ಘೋಷಣೆ ವೇಳೆ ಹಾಜರಿದ್ದ ಅಧಿಕಾರಿಗಳು 111 ಹಳ್ಳಿಗಳಲ್ಲಿ ಬಾಂಗ್ಲಾದೇಶದ ಧ್ವಜ ಹಾಗೂ 51 ಹಳ್ಳಿಗಳಲ್ಲಿ ಭಾರತದ ಧ್ವಜಾರೋಹಣ ನಡೆಸಿದರು. 68 ಮೇಣದ ಬತ್ತಿ ಬೆಳಗುವ ಮೂಲಕ 68 ವರ್ಷಗಳ ಅತಂತ್ರ ಜೀವನವನ್ನು ಸಾಂಕೇತಿಕವಾಗಿ ಬಿಂಬಿಸಲಾಯಿತು. 162 ಹಳ್ಳಿಗಳ ಜನರಿಗೆ ಅಧಿಕೃತ ಪೌರತ್ವ ದೊರಕಿರುವ ಹಿನ್ನೆಲೆಯಲ್ಲಿ ಶಾಲೆ, ಆಸ್ಪತ್ರೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಪಡಿತರ ಚೀಟಿ, ಆಧಾರ್‌ಕಾರ್ಡ್‌ನಂಥ ಸೌಲಭ್ಯಗಳೂ ಈ ನಾಗರಿಕರಿಗೆ ಸಿಗಲಿವೆ.

ಗೊಂದಲಕ್ಕೆ ತೆರೆ: ಬ್ರಿಟಿಷ್ ಆಡಳಿತ ಮುಗಿದು ದೇಶ ಸ್ವತಂತ್ರವಾದ ಸಂದರ್ಭ ಸೃಷ್ಟಿಯಾಗಿದ್ದ ಈ ಪ್ರದೇಶಗಳ ಗೊಂದಲ 1971ರ ಬಾಂಗ್ಲಾ-ಪಾಕ್ ಯುದ್ಧದ ಬಳಿಕವೂ ಹಾಗೇ ಮುಂದುವರಿದಿತ್ತು. 1974ರಲ್ಲಿ ಬಾಂಗ್ಲಾದೇಶ ಈ ವಿವಾದ ಬಗೆಹರಿಸುವ ಪ್ರಸ್ತಾಪ ಮಂಡಿಸಿತ್ತು. ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾಗೆ ಭೇಟಿ ನೀಡಿದ್ದ ಸಂದರ್ಭ ಒಪ್ಪಂದಕ್ಕೆ ಅಂಕಿತ ಹಾಕಿದ್ದರು.

51 ಹಳ್ಳಿಗಳ 14000 ಜನರಿಗೆ ಭಾರತೀಯ ಪೌರತ್ವ111 ಗ್ರಾಮಗಳ 37 ಸಾವಿರ ಜನರು ಈಗ ಬಾಂಗ್ಲಾ ನಾಗರಿಕರು

 ಜನಸಂಖ್ಯೆ

2011ರ ಜನಗಣತಿಯ ಪ್ರಕಾರ 162 ಹಳ್ಳಿಗಳ ಒಟ್ಟು ಜನಸಂಖ್ಯೆ 51,549. ಈ ಪೈಕಿ ಬಾಂಗ್ಲಾದ ಪರಾವೃತ ಪ್ರದೇಶಗಳಲ್ಲಿ 14, 215 ಹಾಗೂ ಭಾರತದಲ್ಲಿ 37,334 ಜನರಿದ್ದಾರೆ.

ಬಾಂಗ್ಲಾಗೆ ಹೋಗಲು ಹಿಂಜರಿಕೆ

ಮಾಹಿತಿಯ ಪ್ರಕಾರ ಬಾಂಗ್ಲಾಕ್ಕೆ ಸೇರಿರುವ ಭಾರತದ 111 ಹಳ್ಳಿಗಳ ಒಂದಿಷ್ಟು ನಾಗರಿಕರಿಗೆ ಬಾಂಗ್ಲಾ ಪೌರತ್ವ ಪಡೆಯುವುದು ಇಷ್ಟವಿಲ್ಲ. ಈ ಪೈಕಿ 979 ಮಂದಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು ಇವರಲ್ಲಿ 169 ಮುಸ್ಲಿಮರೂ ಇದ್ದಾರೆ. ಇವರಿಗೆ ನವೆಂಬರ್ ಬಳಿಕ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಎನ್‌ಕ್ಲೇವ್‌ಎಂದರೆ..

ಪರ ದೇಶದ ಗಡಿಯಿಂದ ಸುತ್ತುವರಿದಿರುವ ಪ್ರದೇಶಕ್ಕೆ ಎನ್‌ಕ್ಲೇವ್(ಪರಾವೃತ ಪ್ರದೇಶ) ಎನ್ನಲಾಗುತ್ತದೆ. ಬಾಂಗ್ಲಾದಲ್ಲಿ ಭಾರತದ 111 ಹಾಗೂ ಭಾರತದಲ್ಲಿ ಬಾಂಗ್ಲಾದ 51 ಎನ್‌ಕ್ಲೇವ್‌ಗಳಿದ್ದವು. ಈ 162 ಪ್ರದೇಶಗಳು 18ನೇ ಶತಮಾನದಲ್ಲಿ ಕೂಚ್‌ಬಿಹಾರ್ ಮತ್ತು ರಂಗಾಪುರ ದೊರೆಗಳ ಆಡಳಿತಕ್ಕೆ ಒಳಪಟ್ಟಿದ್ದವು. 1947ರಲ್ಲಿ ಭಾರತ ಸ್ವತಂತ್ರವಾದ ಸಂದರ್ಭ ಎಲ್ಲ ಪ್ರದೇಶಗಳೂ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಂಗಡಣೆಯಾದರೂ ಈ 162 ಹಳ್ಳಿಗಳ ವಿಷಯ ಮಾತ್ರ ಬಗೆಹರಿದಿರಲಿಲ್ಲ. ಹಾಗಾಗಿ ಇಲ್ಲಿ ನೆಲೆಸಿರುವ ನಾಗರಿಕರಿಗೆ ಅಧಿಕೃತವಾಗಿ ಯಾವ ದೇಶದ ಪೌರತ್ವವೂ ಸಿಕ್ಕಿರಲಿಲ್ಲ. ಮೂಲಸೌಕರ್ಯ ಪಡೆಯುವುದಕ್ಕೂ ಇವರು ಕಳ್ಳಹಾದಿ ತುಳಿಯುವ ಅನಿವಾರ್ಯತೆ ಇತ್ತು.

ಬಾಂಗ್ಲಾದಲ್ಲೂ ಗಡಿ ಸಂಭಮ...

ಗಡಿ ಒಪ್ಪಂದದಿಂದ 37000ಕ್ಕೂ ಹೆಚ್ಚು ಬಾಂಗ್ಲಾ ಜನರಿಗೂ ಅನುಕೂಲವಾಗಿದೆ. ‘ಹಿಂದೆ ಗುರುತಿನ ಚೀಟಿಯೂ ಇರಲಿಲ್ಲ. ಕೆಲಸ ಹುಡುಕಿಕೊಂಡು ಭಾರತಕ್ಕೆ ಹೋಗುತ್ತಿದ್ದೆವು. ಆ ಸಂದರ್ಭ ನಕಲಿ ಗುರುತುಪತ್ರಗಳನ್ನು ಮಾಡಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಇನ್ನು ಮುಂದೆ ನಾವು ಬಾಂಗ್ಲಾ ನಾಗರಿಕರು. ಹಾಗಾಗಿ ಆ ಅನಿವಾರ್ಯತೆ ಇಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.

ಒಪ್ಪಂದದ ಪರಿಣಾಮ

ಭಯೋತ್ಪಾದಕರ ಒಳನುಸುಳುವಿಕೆಗೆ ತಡೆಗೆ ಸಹಕಾರಿ ಉಭಯ ದೇಶಗಳ ಗಡಿ ರಕ್ಷಣಾ ಪಡೆ ಸಿಬ್ಬಂದಿಗೂ ಅನುಕೂಲ ಮೂಲಸೌಕರ್ಯ ಕಲ್ಪಿಸಲು ಅನುಕೂಲ ಉಗ್ರರ ನಿಗ್ರಹ ಕಾರ್ಯಾಚರಣೆಗೂ ಪೂರಕ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸುವುದಕ್ಕೆ ಸಹಕಾರಿಯಾಗಲಿದೆ. ಪುನರ್ವಸತಿ ವ್ಯವಸ್ಥೆ ಏರ್ಪಟ್ಟು ನಾಗರಿಕರ ಬವಣೆ ತಪ್ಪಲಿದೆ.

Sunday, 15 November 2015

PSI ಪ್ರಬಂಧ ರೈತರ ಆತ್ಮಹತ್ಯೆ ಕುರಿತು ಕೇಳಬಹುದು..

Friday, 13 November 2015

PDO/RDO Books

ಈ ಪುಸ್ತಕಗಳು ಬೆಂಗಳೂರಿನ ವಿಜಯನಗರದ ಅರವಿಂದ ಬುಕ್ ಸ್ಟೋರಲ್ಲಿ ಸಿಗುತ್ತವೆ.

a4dable.in ನಲ್ಲಿ ಆನ್ ಲೈನ್ ಮೂಲಕ ಖರೀದಿಸಬಹದು.

Wednesday, 11 November 2015

Books

SDA, FDA, PDO, KAS(ಪೂರ್ವಭಾವಿ/ ಮುಖ್ಯಪರೀಕ್ಷೆ), PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :

ಇತಿಹಾಸ:

1.ಭಾರತದ ಸಮಗ್ರ ಇತಿಹಾಸ- ಟಿ. ಜಿ. ಚಂದ್ರಶೇಖರಪ್ಪ
2. ಭಾರತದ ಸಮಗ್ರ ಇತಿಹಾಸ- ಕೆ. ಸದಾಶಿವ
3.ಆಧುನಿಕ ಭಾರತ- ಬಿಪಿನ್ ಚಂದ್ರ.
4.ಸ್ವಾತಂತ್ರ್ಯದ ಹೋರಾಟ- ಬಿಪಿನ್ ಚಂದ್ರ
5.ಕರ್ನಾಟಕದ ಸಂಕ್ಷಿಪ್ತ ಚರಿತ್ರೆ - ಸೂರ್ಯನಾಥ ಕಾಮತ್
6. ಕರ್ನಾಟಕದ ಸಮಗ್ರ ಇತಿಹಾಸ - ಫಾಲಾಕ್ಷ

7.ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು-ಎನ್.ಪಿ.ಶಂಕರನಾರಾಯಣರಾವ್

ಭಾರತದ ಸಂವಿಧಾನ :

1. ಭಾರತದ ಸಂವಿಧಾನ ಮತ್ತು ರಾಜಕೀಯ- ಹೆಚ್.ಎಮ್.ರಾಜಶೇಖರ
2. ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ್
3. ಭಾರತದ ಸಂವಿಧಾನ- ಮೇರುನಂದನ್

ಅರ್ಥಶಾಸ್ತ್ರ:

1. ಭಾರತದ ಆರ್ಥಿಕ ವ್ಯವಸ್ಥೆ – ಹೆಚ್ಆರ್ಕೆ
2. ಕರ್ನಾಟಕದ ಆರ್ಥಿಕತೆ – ನೇ.ತಿ.ಸೋಮಶೇಖರ್
3.ಅರ್ಥಶಾಸ್ತ್ರದ ಕುರಿತಾದ ಸ್ಪರ್ಧಾಚೈತ್ರದ ಪುಸ್ತಕಗಳು

ಭೂಗೋಳಶಾಸ್ತ್ರ:

1. ಭಾರತದ ಭೂಗೋಳಶಾಸ್ತ್ರ - ರಂಗನಾಥ್
2. ಪ್ರಪಂಚದ ಭೂಗೋಳಶಾಸ್ತ್ರ - ರಂಗನಾಥ್
3. ಕರ್ನಾಟಕದ ಭೂಗೋಳಶಾಸ್ತ್ರ – ರಂಗನಾಥ್ / ಪಿ.ಮಲ್ಲಪ್ಪ
4. ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ್

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ:

1. 8, 9 ಮತ್ತು 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
2. ಪರಿಸರ ವಿಜ್ಞಾನ - ರಂಗನಾಥ್ / ಕೆ.ಭೈರಪ್ಪ
3. ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್ (ಸ್ಪರ್ಧಾಚೈತ್ರ) 
4. ನವಕರ್ನಾಟಕದ ಪ್ರಕಾಶನದ ವಿಜ್ಞಾನ ಪುಸ್ತಕಗಳು

ಪ್ರಚಲಿತ ಘಟನೆಗಳು: 

1. MANORAMA YEAR BOOK
2. ವಾಸನ್ಸ್ ಈಯರ್ ಬುಕ್
3. ಮಾಸಪತ್ರಿಕೆಗಳು - ಸ್ಪರ್ಧಾಚೈತ್ರ, ಬುತ್ತಿ, ಜನಪದ, ಯೋಜನಾ, ಕರ್ನಾಟಕ ವಿಕಾಸ
4. ದಿನಪತ್ರಿಕೆಗಳು - ಪ್ರಜಾವಾಣಿ, HINDU

ಯೋಜನೆಗಳು ಮತ್ತು ಇತರೆ:

1. INDIA -2016 year book
2. ECONOMIC SURVEY OF INDIA
3. ಕರ್ನಾಟಕ ಆರ್ಥಿಕ ಸಮೀಕ್ಷೆ
4. ಕರ್ನಾಟಕ ಕೈಪಿಡಿ 
5. ಕರ್ನಾಟಕ ಸಂಗಾತಿ
6. ಗ್ರಾಮೀಣಾಭಿವೃದ್ಧಿ – ಕೆ.ಭೈರಪ್ಪ
7. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಕಟಣೆಗಳು

ಸಾಮಾನ್ಯ ಮನೋಸಾಮರ್ಥ್ಯ:
• ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ
• ಮನೋಸಾಮರ್ಥ್ಯ - ಸ್ಪರ್ಧಾಚೈತ್ರದ ಪ್ರಕಟಣೆ

ಸ್ನೇಹಿತರೆ ,ನಾನು ಶಂಕರ ಗೌಡಿ.
ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿ.ಮೂರ್ನಾಲ್ಕು ಗ್ರೂಪ್ "ಸಿ" ಸರ್ಕಾರಿ   ಹುದ್ದೆಗಳಿಗೆ ಆಯ್ಕೆಯಾಗಿದ್ದೆ.ಎರಡು ವರ್ಷ ಸಚಿವಾಲಯದಲ್ಲಿ FDA ಆಗಿ ಕೆಲಸ ಮಾಡಿದ್ದೇನೆ. 2011 ರ ಕೆಎಎಸ್ ಬ್ಯಾಚಲ್ಲಿ ಯಾವುದೋ ಗ್ರೂಪ್ "ಬಿ" ಹುದ್ದೆಗೆ ಆಯ್ಕೆಯಾಗಿದ್ದೆ.ಆದರೆ ಅದು ರದ್ದಾಯಿತು.2014 ರ ಕೆಎಎಸ್ ಮುಖ್ಯ ಪರೀಕ್ಷೆ ಬರೆದಿರುವೆ.ನನ್ನದು ಕನ್ನಡ ಮಾಧ್ಯಮ.ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಕನ್ನಡ ಮಾಧ್ಯಮದವರು ಎದುರಿಸುವ ಅಡ್ಡಿಗಳ ಕುರಿತು ನನಗೆ ಅರಿವಿದೆ.ಅಂತಹ ಅಭ್ಯರ್ಥಿಗಳಿಗೆ ನನಗೆ ತಿಳಿದಷ್ಟು ಸಲಹೆಗಳನ್ನು ಹೇಳಬೇಕೆಂದುಕೊಂಡಿದ್ದೇನೆ.
ಇದೇನು ಮಾರ್ಗದರ್ಶನವಲ್ಲ.ಸುಮ್ಮನೆ ನನ್ನ ಕನ್ನಡ ಮಾಧ್ಯಮದ ಸ್ನೇಹಿತರಿಗೆ ನನಗೆ ತಿಳಿದ ವಿಷಯಗಳನ್ನು ಹೇಳುವ ಪ್ರಯತ್ನ ಅಷ್ಟೇ.
ನನ್ನ ದೂರವಾಣಿ:9164874231.                  ಇ-ಮೇಲ್:goudishankar@gmail.com

Blog: shankargoudi.blogspot.com

Facebook ಮೆಸೇಜ್ ಬೇಡ.

Wednesday, 6 May 2015

Digital India:

ಡಿಜಿಟಲ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶವನ್ನು ಭವಿಷ್ಯತ್ತಿನ ಜ್ನಾನವಲಯಕ್ಕೆ ತಕ್ಕಂತೆ ರೂಪಿಸುವ ಯೋಜನೆ. ಇದು ಮಾಹಿತಿ ತಂತ್ರಜ್ನಾನದ ಪೂರಕ ಬೆಳವಣಿಗೆಯೊಂದಿಗೆ ದೇಶವನ್ನು ಸಂಪೂರ್ಣ ತಂತ್ರಜ್ನಾನಯುಕ್ತವನ್ನಾಗಿಸಲಿದೆ.

ಡಿಜಿಟಲ್ ಇಂಡಿಯಾ ಸರ್ಕಾರದ ಪ್ರತಿ ಇಲಾಖೆಯನ್ನು ಒಳಗೊಂಡು, ಸಂಪೂರ್ಣ ಅಧುನಿಕರಣ, ತ್ವರಿತ ಸೇವೆಯ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಇಡಿಯಾ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, 1 ಲಕ್ಷ ಕೋಟಿ ರೂಗಳ ಇ ಯೋಜನೆ , ಇಡೀ ದೇಶವನ್ನು ಡಿಜಿಟಲೀಕರಣ ಮಾಡಲಿದೆ.

ಮುಖ್ಯವಾಗಿ ಮೂರು ಭವಿಷ್ಯದ ದೃಷ್ಟಿಕೋನಗಳನ್ನು ಇದುಹೊಂದಿದೆ. ಪ್ರತಿ ಪ್ರಜೆಗೂ ಡಿಜಿಟಲ್ ಮೂಲಭೂತ ಸೌಕರ್ಯ, ಆಡಳಿತ ಮತ್ತು ಸೇವೆ ಹಾಗೂ ನಾಗರಿಕರ ಡಿಜಿಟಲ್ ಸಬಲೀಕರಣ.
ಪ್ರತಿ ಪ್ರಜೆಗೂ ಡಿಜಿಟಲ್ ಮೂಲಭೂತ ಸೌಕರ್ಯ

* ಹೈಸ್ಪೀಡ್ ಇಂತರ್ ನೆಟ್ ಸೌಕರ್ಯ
* ಡಿಜಿಟಲ್ ಗುರುತು, (ವಿಶಿಷ್ಟ ಗುರುತಿನ ಚೀಟಿ, ಆನ್ ಲೈನ್ ಗುರುತು)
* ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳು
* ಸಾರ್ವಜನಿಕ ಕ್ಲೌಡ್ ತಂತ್ರಜ್ನಾನ ವ್ಯವಸ್ಥೆ
* ದೇಶದಲ್ಲಿ ಅತ್ಯಂತ ಸುರಕ್ಷತೆ ಹೊಂದಿರುವ ಸೈಬರ್ ವ್ಯವಸ್ಥೆ

ಆಡಳಿತ ಮತ್ತು ಸೇವೆ:

ಸರ್ಕಾರದ ಎಲ್ಲಾ ಇಲಾಖೆ, ಕಛೇರಿಗಳಲ್ಲಿ ತಂತ್ರಜ್ನಾನದ ಜತೆಗೆ ಪ್ರಜೆಗಳಿಗೆ ಅನುಕೂಲಕರವಾಗುವರೀತಿ ಸರ್ಕಾರದ ಸೇವೆ ಕುರಿತು ಮೊಬೈಲ್, ಆನ್ ಲೈನ್ ಮೂಲಕ ಮಾಹಿತಿ. ಇಅದರೊಂದಿಗೆ ಹಣಕಾಸು ವ್ಯವಹಾರ, ನಗದು ರಹಿತ ವ್ಯವಹಾರಗಳು, ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನೊಳಗೊಂಡಿರುವ ಜಿಯೋಗಾಕ್ ಇನ್ಫಾರ್ಮೇಶನ್ ಸಿಸ್ಟಂ ಜಾರಿ. 

ಇಡೀ ಆಡಳಿತವನ್ನು ಚುರುಕಾಗಿಸಿ ಕ್ಷಿಪ್ರ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಇದರ ಮುಖ್ಯಗುರಿ. ಸರ್ಕಾರ ಇಲಾಖೆಗಳ ನಡುವಿನ ಕೆಲಸಕ್ಕಾಗಿ ಕಡತಗಳ ತ್ವರಿತ ವಿಲೇವ್ಚಾರಿ ಇತ್ಯಾದಿಗಳು ತಂತ್ರಜ್ನಾನದ ಮೂಲಕವಾಗಲಿದ್ದು, ಇದರೊಂದಿಗೆ ನಾಗರಿಕರ ದೂರುಗಳಿಗೆ ಉತ್ತರಿಸುವುದು.

ನಾಗರಿಕರ ಡಿಜಿಟಲ್ ಸಬಲೀಕರಣ:

* ಸರ್ವವ್ಯಾಪಿ ಡಿಜಿಟಲ್ ಸಾಕ್ಷರತೆ
* ಸರ್ವವ್ಯಾಪಿ ಪಡೆಯಬಹುದಾದ ಡಿಜಿಟಲ್ ಸಂಪನ್ಮೂಲಗಳು
* ಎಲ್ಲಾ ದಾಖಲೆ, ಪ್ರಯಾಣ ಬ್ಪತ್ರಗಳು ಕ್ಲೌಡ್ ತಂತ್ರಜ್ನಾನದಲ್ಲಿ ಲಭ್ಯ
* ಸರ್ಕಾರದ ಕಾರ್ಯಕ್ರಮಗಳಲ್ಲಿ ಕ್ಲೌಡ್ ಮೂಲಕ ನಾಗರಿಕರ ಭಾಗೀದಾರಿಕೆ

ಪ್ರಮುಖ ಗುರಿಗಳು:

* ಬ್ರ್ಯಾಡ್ ಬ್ಯಾಂಡ್ ಹೈವೆ
* ಸರ್ವತ್ರ ಮೊಬೈಲ್ ಸಂಪರ್ಕ
* ಸಾರ್ವಜನಿಕ ಇಂತರ್ನೆಟ್
* ಕಲಿಕೆ/ಬಳಕೆ ಇತ್ಯಾದಿ
* ಇ ಆಡಳಿತ- ತಂತ್ರಜ್ನಾನ ಮುಖಾಂತರ ಸರ್ಕಾರಿ ಸೇವೆಗಳ ಸುಧಾರಣೆ
* ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ
* ಮಾಹಿತಿ ತಂತ್ರಜ್ನಾನ ಕ್ಷೆತ್ರದಲ್ಲಿ ಉದ್ಯೋಗ ಸೃಷ್ಠಿ
* ಅವಧಿಪೂರ್ವ ಕೊಯ್ಲು ತಂತ್ರಜ್ನಾನ

ಡಿಜಿಟಲ್ ಇಂಡಿಯಾ ಮೂಲಕ 2019ರ ವೇಳೆಗೆ ಪೂರೈಸಲಾಗುವಂತೆ ಉದ್ದೇಶಗಳನ್ನು ಹಾಕಿಕೊಳ್ಳಲಾಗಿದೆ.

2.5 ಲಕ್ಷಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ, ಸಾರ್ವಜನಿಕ ಮೊಬೈಲ್ ಸಂಪರ್ಕ, 4 ಲಕ್ಷ ಸಾರ್ವಜನಿಕ ಅಂತರ್ಜಾಲ ಬಳಕೆ ಕೇಂದ್ರಗಳು, 1.7 ಕೋಟಿ ಮಂದಿಗೆ ಮಾಹಿತಿ ತಂತ್ರಜ್ನಾನ ತರಬೇತಿ, ಟೆಲಿಕಾಂ, ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಉದ್ಯೋಗ, ಸರ್ಕಾರದಲ್ಲಿ ಸಂಪೂರ್ಣ ಇ ಆಡಳಿತ ಮತ್ತು ಸೇವೆ, ಐಟಿ ಬಳಕೆ ಮತ್ತು ಸೇವೆಯಲ್ಲಿ ಭಾರತವೇ ಅಗ್ರಗಣ್ಯವಾಗುವ ಗುರಿ, ಡಿಜಿಟಲ್ ಸುಧಾರಣೆ ಡಿಜಿಟಲ್ ಇಂದಿಯಾದ ಸಧನೆಗಳಾಗಿವೆ.

ಮಹತ್ವಾಕಾಂಕ್ಷಿ ಡಿಜಿಟಲ್ ಇಂಡಿಯಾಕ್ಕಾಗಿ 1 ಲಕ್ಷ ಕೋಟಿ ರೂ. ಹಣ ನಿಗದಿಯಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 13 ಸಾವಿರ ಕೋಟಿ ಹಣ ನಿಗದಿ ಮಾಡಲಾಗಿದೆ. ನರೇಂದ್ರ ಮೋದಿಯವರ ಈ ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾ ಹೊಸ ಕ್ರಾಂತಿಮಾಡಲಿದೆ.

 

Sunday, 3 May 2015

KAS MAIN'S, CLASSES FOR RURAL DEVELOPMENT SUBJECT, CONDUCTED BY Dr.NARAYANA RAJ.N, SUBJECT EXPERT AND SENIOR FACULTY. ATTEND WORKSHOP AND REGULAR CLASSES (ENGLISH MEDIUM) FROM 4th MAY 2015,  AT6.00 PM AT PADMA COLLEGE,  #24/39, 1st  FLOOR, 4th STAGE, NEAR KHB  TRAFFIC  SIGNAL (INDIAN OIL PETROL BUNK), MAGADI ROAD ,BASAVESHWARA NAGAR, BANGALORE 560079. 
CONTACT; 98451 32982.

Thursday, 30 April 2015

ಕರ್ನಾಟಕ ಸರ್ಕಾರದ ನೂತನ ಕೈಗಾರಿಕಾ ನೀತಿಯ ಮುಖ್ಯಾಂಶಗಳು :
* ಶೇ. 12ರ ಬೆಳವಣಿಗೆಯ 2014-19 ರ ಕೈಗಾರಿಕಾ ನೀತಿ
* 5 ಲಕ್ಷ ಕೋಟಿ ಬಂಡಾವಳ ಹೂಡಿಕೆ ಮತ್ತು 15 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ
* ಪ್ರತಿ ವರ್ಷ 5000 - 8000 ಎಕರೆ ವಿಸ್ತೀರ್ಣದ 5 ಕೈಗಾರಿಕಾ ವಲಯ ಸ್ಥಾಪನೆ ಮಾಡುವದು
* ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಹೈ-ಕ ವಲಯದಲ್ಲಿ 2 ಕೈಗಾರಿಕಾ ವಲಯ ಸ್ಥಾಪನೆ
* ಕೈಗಾರಿಕೆ ಸ್ಥಾಪನೆ ಮಾಡಲು ವಲಯಗಳಾಗಿ ರಾಜ್ಯವನ್ನು ವಿಭಾಗ ಮಾಡುವುದು
* ವಲಯ 1 ರಲ್ಲಿ 23 ಅತ್ಯಂತ ಹಿಂದುಳಿದ ತಾಲೂಕುಗಳು, ವಲಯ 2 ರಲ್ಲಿ 51 ಅತೀ ಹಿಂದುಳಿದ ತಾಲೂಕುಗಳು
* ವಲಯ 3 ರಲ್ಲಿ 62 ಹಿಂದುಳಿದ ಮತ್ತು 4 ರಲ್ಲಿ 9 ಅಭಿವೃದ್ದಿ ತಾಲೂಕುಗಳು ಸೇರ್ಪಡೆ.
* ಹೈ-ಕ ವಲಯ 1 ರಲ್ಲಿ 20 ಅತ್ಯಂತ ಹಿಂದುಳಿದ ಹಾಗೂ 2 ರಲ್ಲಿ 11 ಅತೀ ಹಿಂದುಳಿದ ತಾಲುಕುಗಳ ಸೇರ್ಪಡೆ
* ಅತೀ ಸಣ್ಣ ಕೈಗಾರಿಕೆಗಳಿಗೆ ಶೇ 20 ರಷ್ಟು ಜಮೀನು * ಸಣ್ಣ ಕೈಗಾರಿಕೆಗಳಿಗೆ 10 ಲಕ್ಷದಿಂದ 20 ಲಕ್ಷ ಹಾಗೂ ಗರಿಷ್ಠ 20 ಲಕ್ಷದಿಂದ 45 ಲಕ್ಷ ಸಹಾಯಧನ ಏರಿಕೆ.
* ಮಧ್ಯಮ ಕೈಗಾರಿಕೆಗಳಿಗೆ ಕನಿಷ್ಠ 20 ರಿಂದ 30 ಲಕ್ಷ ಹಾಗೂ ಗರಿಷ್ಠ 30 ರಿಂದ 55 ಲಕ್ಷ ಸಹಾಯಧನ ಏರಿಕೆ
* ಎಸ್‍ಸಿ, ಎಸ್‍ಟಿ ವರ್ಗದವರಿಗೆ ಕೆಐಎಡಿಬಿ/ಕೆಎಸ್‌ಡಿಸಿ ಯಲ್ಲಿ ಶೇ 22.50 ರಷ್ಟು ಜಮೀನು ಕಾಯ್ದಿರಿಸುವಿಕೆ.
* ಮಹಿಳೆಯರು, ಅಂಗವಿಕಲರು ಮಾಜಿ ಸೈನಿಕರು, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಉದ್ದಿಮೆದಾರರಿಗೆ ಶೇ 5 ರಷ್ಟು ಜಮೀನು ಕಾಯ್ದಿರಿಸುವಿಕೆ.
* ಹುಬ್ಬಳ್ಳಿ ಹಾರೋಹಳ್ಳಿಯಲ್ಲಿ ಮಹಿಳಾ ಕೈಗಾರಿಕಾ ವಲಯ ಸ್ಥಾಪನೆ, ಜವಳಿ ಆಭರಣ ಕ್ಷೇತ್ರದಲ್ಲಿ ಕ್ಲಸ್ಟರ್ ಸ್ಥಾಪನೆ * ಅನಿವಾಸಿ ಕನ್ನಡಿಗರಿಗೆ ಬಂಡವಾಳ ಹೂಡಿಕೆ ಪ್ರೋತ್ಸಾಹಧನ ಕೇಂದ್ರ ಸ್ಥಾಪನೆ

ಮೋದಿ ಸರಕಾರದಿಂದ ನಿರ್ಮಾಣವಾಗಲಿದೆ ‘ಭಾರತಮಾಲಾ’ ರಸ್ತೆ..!

ಈ ಹಿಂದೆ ಎನ್’ಡಿಎ ಸರಕಾರದ ವೇಳೆ ಅಂದಿನ ಪ್ರಧಾನಿ ವಾಜಪೇಯಿ ಗೋಲ್ಡನ್ ಕ್ವಾಡ್ರಾಲ್ಯಾಟರಲ್ (ಸುವರ್ಣ ಚತುಷ್ಪಥ ರಸ್ತೆ) ನಿರ್ಮಿಸಿದ್ದರು. ಈ ಮೂಲಕ ದೇಶದ 4 ಮೂಲೆಗಳನ್ನು ರಸ್ತೆ ಮೂಲಕ ಬೆಸೆಯುವ ಕೆಲಸ ಮಾಡಿದ್ದರು. ಇದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಭಾರತಮಾಲಾ ರಸ್ತೆ. ಈ ರಸ್ತೆಯ ಮೂಲಕ ಪೂರ್ವ, ಉತ್ತರ ಹಾಗೂ ಪಶ್ಚಿಮದ ಗಡಿ ಭಾಗಗಳನ್ನು ಬೆಸೆಯಲು ಮುಂದಾಗಿದ್ದಾರೆ.

ಏನಿದು ಭಾರತಮಾಲಾ ರಸ್ತೆ..?

ಭಾರತದ ಗಡಿ ಉದ್ದದಲ್ಲೂ ನಿರ್ಮಾಣವಾಗುವ ರಸ್ತೆ ಯೋಜನೆ ಇದು. ಗುಜರಾತ್’ನಿಂದ ಆರಂಭವಾಗುವ ಈ ರಸ್ತೆ ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ. ಸಿಕ್ಕಿಂ, ಅಸ್ಸಾಂ, ಅರುನಾಚಲ ಪ್ರದೇಶ, ಭಾರತ ಹಾಗೂ ಮಯನ್ಮಾರ್ ಗಡಿ ಮೂಲಕ ಸಾಗಿ ಮಣಿಪುರ-ಮಿಜೋರಾಂ ತಲುಪಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಇಡೀ ರಸ್ತೆಯು ಮಾಲೆಯ ರೀತಿಯಲ್ಲಿ ಕಾಣುತ್ತದೆ. ಈ ಕಾರಣದಿಂದಾಗಿ ಭಾರತಮಾಲಾ ಎಂದು ಹೆಸರಿಡಲಾಗಿದೆ.

ಈ ಯೋಜನೆಗೆ 14 ಸಾವಿರ ಕೋಟಿ ರೂ. ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ  ಕರಾವಳಿ ನಗರಗಳನ್ನು ಬೆಸೆಯಲು ನಿರ್ಮಿಸಲು ಉದ್ದೇಶಿಸಿರುವ ‘ಸಾಗರ ಮಾಲಾ’ ಯೋಜನೆ ಜೊತೆ ಸಂಪರ್ಕಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅನುಮತಿಗಳು ದೊರೆತಿದ್ದು, ಈ ವರ್ಷದ ಅತ್ಯಂಕ್ಕೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇದರಿಂದ ಆಗುವ ಪ್ರಯೋಜನೆಗಳೇನು..?

> ಈ ರಸ್ತೆಯಿಂದಾಗಿ ಚೀನಾಗೆ ಪಾಠ ಕಲಿಸಿದಂತಾಗುತ್ತದೆ. ಏಕೆಂದರೆ ಚೀನಾ ಈಗಾಗಲೇ ಗಡಿಯಲ್ಲಿ ಉತ್ತಮ ರಸ್ತೆ ಹೊಂದಿದೆ. ಭಾರತವೂ ರಸ್ತೆ ನಿರ್ಮಿಸಿದರೆ ಚೀನಾಕ್ಕೆ ಉತ್ತರ ನೀಡಲು ಹಾಗೂ ಗಡಿಯಲ್ಲಿ ಸಂಪರ್ಕ ಸುಲಭವಾಗುತ್ತದೆ.   

> ಯುದ್ಧದ ಸಂದರ್ಭದಲ್ಲಿ ಗಡಿಗೆ ಸಮರ ಸಾಮಗ್ರಿ ಹೊತ್ತೊಯ್ಯಲು ಹಾಗೂ ಯೋಧರನ್ನು ಸಾಗಿಸಲು ಬಳಸಲು ಕೆಟ್ಟದಾಗಿವೆ. ಈ ಯೋಜನೆಯಿಂದಾಗಿ ಸಂಚಾರ ಸುಲಭವಾಗಲಿದೆ.

> ರಸ್ತೆ ಅಭಿವೃದ್ಧಿಯಾದರೆ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ವೃದ್ಧಿಯಾಗುತ್ತದೆ. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತದೆ.

ಒಟ್ಟಿನಲ್ಲಿ ಈ ಭಾರತಮಾಲಾ ರಸ್ತೆ ದೇಶದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೇಂದ್ರ ರಸ್ತೆ ಇಲಾಖೆ ಕಾರ್ಯದರ್ಶಿ ವಿಜಯ್ ಛಿಬ್ಬರ್ ತಿಳಿಸಿದ್ದಾರೆ.

Saturday, 25 April 2015

Industrial Policy of Karnataka 2014-19

Books:

ಸ್ನೇಹಿತರೆ,  objective type ಪರೀಕ್ಷೆಗಳಿಗೆ ಈ ಎರಡು ಬುಕ್ಸ್ ಉತ್ತಮವಾಗಿವೆ.

Current Affairs:

Mission Indradhanush....

SDA, FDA, PDO, KAS(ಪೂರ್ವಭಾವಿ/ ಮುಖ್ಯಪರೀಕ್ಷೆ), PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :

ಇತಿಹಾಸ:

1.ಭಾರತದ ಸಮಗ್ರ ಇತಿಹಾಸ- ಟಿ. ಜಿ. ಚಂದ್ರಶೇಖರಪ್ಪ
2. ಭಾರತದ ಸಮಗ್ರ ಇತಿಹಾಸ- ಕೆ. ಸದಾಶಿವ
3.ಆಧುನಿಕ ಭಾರತ- ಬಿಪಿನ್ ಚಂದ್ರ.
4.ಸ್ವಾತಂತ್ರ್ಯದ ಹೋರಾಟ- ಬಿಪಿನ್ ಚಂದ್ರ
5.ಕರ್ನಾಟಕದ ಸಂಕ್ಷಿಪ್ತ ಚರಿತ್ರೆ - ಸೂರ್ಯನಾಥ ಕಾಮತ್
6. ಕರ್ನಾಟಕದ ಸಮಗ್ರ ಇತಿಹಾಸ - ಫಾಲಾಕ್ಷ
7.ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು-ಎನ್.ಪಿ.ಶಂಕರನಾರಾಯಣರಾವ್

ಭಾರತದ ಸಂವಿಧಾನ :

1. ಭಾರತದ ಸಂವಿಧಾನ ಮತ್ತು ರಾಜಕೀಯ- ಹೆಚ್.ಎಮ್.ರಾಜಶೇಖರ
2. ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ್
3. ಭಾರತದ ಸಂವಿಧಾನ- ಮೇರುನಂದನ್

ಅರ್ಥಶಾಸ್ತ್ರ:

1. ಭಾರತದ ಆರ್ಥಿಕ ವ್ಯವಸ್ಥೆ – ಹೆಚ್ಆರ್ಕೆ
2. ಕರ್ನಾಟಕದ ಆರ್ಥಿಕತೆ – ನೇ.ತಿ.ಸೋಮಶೇಖರ್

ಭೂಗೋಳಶಾಸ್ತ್ರ:

1. ಭಾರತದ ಭೂಗೋಳಶಾಸ್ತ್ರ - ರಂಗನಾಥ್
2. ಪ್ರಪಂಚದ ಭೂಗೋಳಶಾಸ್ತ್ರ - ರಂಗನಾಥ್
3. ಕರ್ನಾಟಕದ ಭೂಗೋಳಶಾಸ್ತ್ರ – ರಂಗನಾಥ್ / ಪಿ.ಮಲ್ಲಪ್ಪ
4. ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ್

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ:

1. 8, 9 ಮತ್ತು 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
2. ಪರಿಸರ ವಿಜ್ಞಾನ - ರಂಗನಾಥ್ / ಕೆ.ಭೈರಪ್ಪ
3. ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್ (ಸ್ಪರ್ಧಾಚೈತ್ರ) 
4. ನವಕರ್ನಾಟಕದ ಪ್ರಕಾಶನದ ವಿಜ್ಞಾನ ಪುಸ್ತಕಗಳು

ಪ್ರಚಲಿತ ಘಟನೆಗಳು: 

1. MANORAMA YEAR BOOK
2. ವಾಸನ್ಸ್ ಈಯರ್ ಬುಕ್
3. ಮಾಸಪತ್ರಿಕೆಗಳು - ಸ್ಪರ್ಧಾಚೈತ್ರ, ಬುತ್ತಿ, ಜನಪದ, ಯೋಜನಾ, ಕರ್ನಾಟಕ ವಿಕಾಸ
4. ದಿನಪತ್ರಿಕೆಗಳು - ಪ್ರಜಾವಾಣಿ, HINDU

ಯೋಜನೆಗಳು ಮತ್ತು ಇತರೆ:

1. INDIA -2015
2. ECONOMIC SURVEY OF INDIA : 2014-15
3. ಕರ್ನಾಟಕ ಆರ್ಥಿಕ ಸಮೀಕ್ಷೆ : 2014-15
4. ಕರ್ನಾಟಕ ಕೈಪಿಡಿ 
5. ಸಾಹಿತ್ಯ ಕರ್ನಾಟಕ
6. ಚಾರಿತ್ರಿಕ ಕರ್ನಾಟಕ
7. ಅಭಿವೃದ್ಧಿ ಪಥ
8. ಸಾಂಸ್ಕೃತಿಕ ಪಥ
9. ಗ್ರಾಮೀಣಾಭಿವೃದ್ಧಿ – ಕೆ.ಭೈರಪ್ಪ
10. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಕಟಣೆಗಳು

ಸಾಮಾನ್ಯ ಮನೋಸಾಮರ್ಥ್ಯ:
• ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ
• ಮನೋಸಾಮರ್ಥ್ಯ - ಸ್ಪರ್ಧಾಚೈತ್ರದ ಪ್ರಕಟಣೆ

2011 KAS prelims cut off.. ee sala 20-25 marks kadime irabahudu..